ಹಲವಾರು ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಎನ್ ಎಸ್ ರಾಜಕುಮಾರ್ ಅವರ ಜನಪ್ರಿಯ ನಿರ್ದೇಶಕ ಪವನ್ ವಡೆಯರ್ ಅವರ ಶರಣ್ ಹಾಗೂ ಮಯೂರಿ ಮುಖ್ಯ ತಾರಗಣದ ‘ನಟರಾಜ ಸರ್ವಿಸ್’ ಮಾತುಗಳನ್ನು ಮುಗಿಸಿಕೊಂಡು ಇದೀಗ ಧ್ವನಿ ಸಾಂದ್ರಿಕೆ ಬಿಡುಗಡೆ ಮಾಡಲು ಅಣಿಯಾಗುತ್ತ ಇದೆ.
ಇತ್ತೀಚಿಗೆ ‘ಮೈತ್ರಿ, ಜಟ್ಟ, ಮೈನಾ’ ಚಿತ್ರಗಳನ್ನು ನೀಡಿದ ನಿರ್ಮಾಪಕ ಎನ್ ಎಸ್ ರಾಜಕುಮಾರ್ ಅವರು ಈ ಚಿತ್ರವನ್ನು ಓಂಕಾರ್ ಮೂವೀಸ್ ಅಡಿಯಲ್ಲಿ ಅವರ ಪುತ್ರ ಸೂರ್ಯ ಅವರ ಹೆಸರಿನಲ್ಲಿ ತಯಾರಿಸುತ್ತಾ ಇದ್ದಾರೆ. ಈ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಹ ಒಂದು ಹಾಡನ್ನು ಹೇಳಿದ್ದಾರೆ. ಅನೂಪ್ ಸೀಳಿನ್ ಈ ಚಿತ್ರದ ರಾಗ ಸಂಯೋಜಕರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಚಿತ್ರವನ್ನು ತೆರೆಗೆ ಅರ್ಪಿಸುತ್ತ ಇದ್ದಾರೆ.
ಶರಣ್ ಈ ಚಿತ್ರದಲ್ಲಿ ಬಹುತೇಕ ನಡೆದಾಡುತ್ತಾ ಇರುವ ಪಾತ್ರ ನಿರ್ವಹಿಸಿದ್ದಾರೆ. ಹಾಸ್ಯದ ಜೊತೆಗೆ ಮನ ಮಿಡಿಯುವ ಸನ್ನಿವೇಶಗಳನ್ನು ಪವನ್ ವಡೆಯರ್ ಪೇರಿಸಿದ್ದಾರೆ. ಬೆಂಗಳೂರು, ದಾಂಡೇಲಿ, ಸಿರಸಿ, ಯಲ್ಲಾಪುರ ಸುತ್ತಿ ಬಂದಿದೆ ಚಿತ್ರ ತಂಡ.
ಕೃಷ್ಣ ಲೀಲ, ಇಷ್ಟ ಕಾಮ್ಯ ಚಿತ್ರಗಳ ನಾಯಕಿ ಮಯೂರಿ ಅವರ ಮೂರನೇ ಚಿತ್ರ ಇದು. ಅರುಳ್ ಕೆ ಸೋಮಸುಂದರಂ ಛಾಯಾಗ್ರಹಣ, ಸುರೇಶ್ ಅವರ ಸಂಕಲನ, ಮುರಳಿ ಅವರ ನೃತ್ಯ, ಗುಣ ಅವರ ಕಲೆ ಈ ಚಿತ್ರಕ್ಕೆ ಇದೆ.